Friday, January 9, 2009

ಸಮ್ಮೋಹನ

ನಾ ಅಂದು ಬರೆದ ಪ್ರತಿಯೊಂದು ಪದಕ್ಕೂ,
ಇಂದು, ಮುಂದು, ಎಂದೆಂದೂ ಬರೆಯುವ ಪ್ರತಿ ಪದಕ್ಕೂ ನೀನೆ ಕಾರಣ.
ನನ್ನ ನಿರೀಕ್ಷೆಯ ನಿಧಿಯ ನನಸಾಗಿಸಿದ ನೀನೆ,
ನನ್ನಲ್ಲಿ ಮೂಡುವ ಭಾವಗಳ, ಅಕ್ಷರಗಳಾಗಿಸುವ ಕ್ರಿಯೆಯ ಮೂಲ ಪ್ರೇರಣ.
ಬರೆಯಬೇಕೆನಿಸುವ ಭಾವಗಳ ಮನದೊಳಗೆ ಬಿತ್ತಿದ ಬೆಳೆಗಾರ,
ಕನಸಿಸಲು ಅದ ಕಾವ್ಯವಾಗಿಸಲು ತನ್ಮೂಲಕ,
ತರಬೇತಿಯಿಲ್ಲದೆ ಮನದ ತಳದಲ್ಲೇ ಉಳಿದುಹೋಗುತ್ತಿದ್ದ ಭಾವ ತಿಲ್ಲಾನಗಳ
ಗೆಜ್ಜೆಕಟ್ಟಿ ರಂಗದ ಮೇಲೆ ಕುಣಿಸಲು ಕಲಿಸಿದ ಕಲೆಗಾರ...

17 comments:

ಮನಸ್ವಿ said...

ಓಹೋ ಯಾರೇ ಅದು?? "ಇಂದು ಮುಂದು ಎಂದೆಂದೂ ಬರೆಯುವ ಪ್ರತಿ ಪದಕ್ಕೂ ಕಾರಣ??" ಸುಂದರ ಕವನ.. ಬರಿತಾ ಇರು ಕೂಸೆ..:)

Sushrutha Dodderi said...

ಓಹ್ ಹಾಯ್.. ನಿನ್ ಬ್ಲಾಗ್ ಇರೋದು ಗೊತ್ತೇ ಇರ್ಲೆ.. ಚನಾಗ್ ಬರಿತೆ.. ಕೀಪ್ ರೈಟಿಂಗ್. :-)

Radhika Nadahalli said...

@ಮನಸ್ವಿ ನನ್ನ ಬರೆಯುವ ಶಕ್ತಿಯ ಗುರುತಿಸಿದ ಗುರುವೇ ಅದಕ್ಕೆ ಕಾರಣ...
ಧನ್ಯವಾದ :-)
@ಸುಶ್ರುತಣ್ಣ :-) ಧನ್ಯವಾದ...ಬರ್ತಾ ಇರು ನನ್ ಬ್ಲಾಗ್ ಕಡೆ

Ittigecement said...

ಕವನ...
ಚಂದವಾಗಿದೆ...
ಪ್ರತಿಸಾಲುಗಳು..
ಮನ ತಟ್ಟುವಂತಿದೆ...

ಅಭಿನಂದನೆಗಳು...

Srivathsa Joshi said...

ರಾಧಿಕಾ,

ಕವನ ರಸಾಸ್ವಾದನೆಯಲ್ಲಿ ಪಳಗದ ನನಗೂ ಇಷ್ಟವಾಗುವಂತೆ ಸುಂದರವಾಗಿದೆ ಈ ಕವನ! ಚಿಕ್ಕ-ಚೊಕ್ಕ ಮತ್ತು ’ಪರಿಶುಭ್ರ’ ಭಾವನಿವೇದನೆ ಎಂದು ನನಗೆ ಅನಿಸಿತು. ಹೀಗೆಯೇ ಬರೆಯುತ್ತಿರಿ, ಇನ್ನೂ ಹೆಚ್ಚು ಒಳ್ಳೆಯ ಕವಿತೆ, ಲೇಖನ, ಕಥೆ, ಪ್ರಬಂಧ ಇತ್ಯಾದಿ ವಿವಿಧ ಪ್ರಕಾರಗಳು ನಿಮ್ಮ ಬ್ಲಾಗ್‌ನಲ್ಲಿ ಬೆಳಗಲಿ.
ಸಂಕ್ರಾಂತಿಯ ಸಂದರ್ಭದಲ್ಲಿ ಶುಭಾಶಯಗಳು!
:-)

ಶರಶ್ಚಂದ್ರ ಕಲ್ಮನೆ said...

ಚಂದವಾಗಿ ಬರದ್ಯಲೇ ಕವಿತೆನ :) ಇಷ್ಟು ಚನ್ನಾಗಿ ಬರಿತೆ, ಅವತ್ತು ನನ್ನ ಕವಿತೆಯ ಅವಶ್ಯಕತೆ ಇತ್ತ ನಿಂಗೆ ??

Radhika Nadahalli said...

@ಪ್ರಕಾಶಣ್ಣ ಧನ್ಯವಾದಗಳು :-)
@ಜೋಷಿ ಸರ್
ಓಹ್ ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮಗೂ ಸಂಕ್ರಾಂತಿಯ ಶುಭಾಶಯಗಳು
@ಶರಶ್ಚಂದ್ರ
ಧನ್ಯವಾದ... :-) ಹಾ ಅವತ್ತು ಆ ಸಂದರ್ಭಕ್ಕೆ ಇತ್ತು...

Rajesh Manjunath - ರಾಜೇಶ್ ಮಂಜುನಾಥ್ said...

ಸಿಂಚನ,
ಬರಿ ಚೆನ್ನಾಗಿದೆ ಅಲ್ಲ, ಒಂದು ಪರಿಪೂರ್ಣತೆಯು ಇದೆ. ಖುಷಿ ಕೊಟ್ಟಿತು ಕವನ. ನಿಮ್ಮ ಪ್ರತಿ ಪದಕ್ಕೆ ಪ್ರೇರಣೆಯಾದವರು ಸದಾ ನಿಮ್ಮ ಜೊತೆಗಿದ್ದು ಇನ್ನು ಹೆಚ್ಚಿನದನ್ನು ಬರೆಯಲು ನಿಮಗೆ ಸ್ಪೂರ್ತಿಯಾಗಲಿ ಎಂಬುದೇ ನನ್ನ ಹಾರೈಕೆ...
-ರಾಜೇಶ್ ಮಂಜುನಾಥ್

ಕನಸು said...

ನಿನ್ನ ಕನಸಿಗೆ ಬಂದಿದ್ದೆನೆ
ನಿಮ್ಮ `ಸಮ್ಮೋಹನ`
ಮೋಹಕವಾಗಿದೆ
ಪ್ರೀತಿ ಇರಲಿ

ಶಿವಪ್ರಕಾಶ್ said...

ಬಹಳ ಚನ್ನಾಗಿದೆ,
ಅಭಿನಂದನೆಗಳು...

ಯಜ್ಞೇಶ್ (yajnesh) said...

ರಾಧಿಕಾ,

ನೀನು ಬ್ಲಾಗ್ ಬರಿತಾ ಇರೋ ವಿಶ್ಯ ಗೊತ್ತಿರ್ಲೇ. ಸಂದೀಪನ ಬ್ಲಾಗಿನಲ್ಲಿ ನಿನ್ ಬ್ಲಾಗಿನ ಲಿಂಕ್ ಸಿಗ್ತು. ಚೆನ್ನಾಗಿ ಬರಿತೆ. ಬರಿತಾ ಇರು

Radhika Nadahalli said...

@ರಾಜೇಶ್ ಮಂಜುನಾಥ್
ಧನ್ಯವಾದಗಳು ನಿಮ್ಮ ಹಾರೈಕೆಗೆ.

@ಕನಸು
ಧನ್ಯವಾದಗಳು,ಆದರೆ ತಮ್ಮ ಪರಿಚಯವಾಗಲಿಲ್ಲ...

@ಶಿವಪ್ರಕಾಶ್
ಧನ್ಯವಾದಗಳು

@ಯಜ್ಞೇಶಣ್ಣ
:-) ಥ್ಯಾಂಕ್ಸ್...ಬರ್ತಾ ಇರು ಬ್ಲಾಗ್ ಕಡೆ

shivu.k said...

ಪ್ರಕಾಶ್‌ರವರ ಬ್ಲಾಗಿನಿಂದ ಹೀಗೆ ಹಾರಿಕೊಂಡು ಬಂದೆ.....

ಕವನ ಚೆನ್ನಾಗಿದೆ....
"ಇಂದು ಮುಂದು ಎಂದೆಂದೂ ಬರೆಯುವ ಪ್ರತಿ ಪದಕ್ಕೂ ಕಾರಣ??" ಪದ ಪ್ರಯೋಗಗಳು ನನಗೆ ಇಷ್ಟವಾದವು. ಉಳಿದವು ಚೆನ್ನಾಗಿರಬಹುದು.....ನಿಮ್ಮ ಉಳಿದ ಲೇಖನಗಳನ್ನು ಓದುತ್ತೇನೆ....ನನ್ನ ಬ್ಲಾಗಿಗೊಮ್ಮೆ ನಿಮ್ಮ ಭೇಟಿಯಾಗಲಿ...ಅಲ್ಲಿ ನಿಮಗಿಷ್ಟವಾದ ಲೇಖನಗಳಿರಬಹುದು...ಫೋಟೋಗಳಿರಬಹುದು....

Harisha - ಹರೀಶ said...

ಚೆನ್ನಾಗಿದ್ದು.... ಗಾಡಿ ನಿಂತು ಹೋಯ್ದಲ.. ಮತ್ತೆ ಬರಿ..

Radhika Nadahalli said...

@ ಶಿವು
ಧನ್ಯವಾದಗಳು...ಉಳಿದ ಲೇಖನಗಳನ್ನೂ ಓದಿ...

@ಹರೀಶ್
:-) ಖಂಡಿತ ಬರಿತಿ...

Shouri Shanbhog said...

hey ni nan friend anta heLkalakk khushi aagtu.... :-)

Radhika Nadahalli said...

thanks shouri :-)

Powered By Blogger

Followers