Friday, January 9, 2009

ಸಮ್ಮೋಹನ

ನಾ ಅಂದು ಬರೆದ ಪ್ರತಿಯೊಂದು ಪದಕ್ಕೂ,
ಇಂದು, ಮುಂದು, ಎಂದೆಂದೂ ಬರೆಯುವ ಪ್ರತಿ ಪದಕ್ಕೂ ನೀನೆ ಕಾರಣ.
ನನ್ನ ನಿರೀಕ್ಷೆಯ ನಿಧಿಯ ನನಸಾಗಿಸಿದ ನೀನೆ,
ನನ್ನಲ್ಲಿ ಮೂಡುವ ಭಾವಗಳ, ಅಕ್ಷರಗಳಾಗಿಸುವ ಕ್ರಿಯೆಯ ಮೂಲ ಪ್ರೇರಣ.
ಬರೆಯಬೇಕೆನಿಸುವ ಭಾವಗಳ ಮನದೊಳಗೆ ಬಿತ್ತಿದ ಬೆಳೆಗಾರ,
ಕನಸಿಸಲು ಅದ ಕಾವ್ಯವಾಗಿಸಲು ತನ್ಮೂಲಕ,
ತರಬೇತಿಯಿಲ್ಲದೆ ಮನದ ತಳದಲ್ಲೇ ಉಳಿದುಹೋಗುತ್ತಿದ್ದ ಭಾವ ತಿಲ್ಲಾನಗಳ
ಗೆಜ್ಜೆಕಟ್ಟಿ ರಂಗದ ಮೇಲೆ ಕುಣಿಸಲು ಕಲಿಸಿದ ಕಲೆಗಾರ...
Powered By Blogger

Followers