Thursday, March 26, 2009

ನೆನಪಿನ ತುಣುಕುಗಳು...

ಯುಗಾದಿಯ ಸಮಯದಲ್ಲಿ ಒಂದು ಪೋಸ್ಟಿಂಗ್ ಮಾಡಣ ಅಂತ ಅನ್ನಿಸ್ತು, ಆದರೆ ಹೊಸ ಬರಹ ಏನಲ್ಲ ಎಲ್ಲೋ ಬರೆದಿಟ್ಟಿದ್ದ ಕೆಲವು ಸಾಲುಗಳನ್ನೇ ಇಲ್ಲಿ ಪ್ರಕಟಿಸುತ್ತಿದ್ದೇನೆ,ಪ್ರಕಟಿಸುವ ಉತ್ಸಾಹಕ್ಕಾಗಿ... :-)


*ಕರಿ ನೆರಳಿನಿಂದ ದೂರ ಸರಿದು ಹೊಸ ಬೆಳಕ ಕಣ್ಣಲಿ ತುಂಬಿಕೊಳ್ಳಲು
ಜೀವನದ ಕನಸ ಕನಸಿಸಲು ಕೂಡಿ ಬಂದ ಸಮಯ...

*ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ ,ಇಂದಿಗೂ ಅದನ್ನು
ಜೀವಂತವಾಗಿರಿಸಲು ಉತ್ಸುಕಳಾಗಿರುವೆ,ಅದಕ್ಕಾಗಿ ಆಗಾಗ ನಿನ್ನ ಪ್ರತಿಕ್ರಿಯೆಯ ಬಯಸುತ್ತಿರುವೆ ...

*ಕಣ್ಣೊಳಗಿನ ಕನಸ ಕಣ್ಣ ಹೊಳಪಾಗಿಸು, ಬದುಕ ಬೆಳಕಾಗಿಸು
ಮನದೊಳಗಿನ ಪ್ರೀತಿಯ ಬದುಕ ಸ್ಫೂರ್ತಿಯಾಗಿಸು,ಜೀವನದ ಆದ್ಯತೆಯಾಗಿಸು...

*ಸೂರ್ಯರಶ್ಮಿ ಪ್ರಖರತೆ ಸಾಕೇ ಕಣ್ಣ ಪೊರೆ,
ತೆರೆಸಲು ಮನದ ಬಣ್ಣ ಅರಿಯಲು...
ಹಿತವಾದ ಎಲೆ ಬಿಸಿಲೋ ಅಥವಾ ಸುಡುವ ಬಿರು ಬಿಸಿಲೋ.....?
ಯಾವುದು ಚೆನ್ನ ನೀನೆ ಹೇಳು....

Sunday, March 1, 2009

ನಾಪತ್ತೆ-ಹೀಗೊಂದು ಪ್ರಕಟಣೆ!

ನಾನು ಬ್ಲಾಗ್ ಬರೆಯದೇ ತುಂಬ ದಿನವಾಯಿತು,ಬರೆಯಲು ಸಾಧ್ಯವಾಗಿಲ್ಲ ಎಂಬುದು ಕಾರಣ ಅಲ್ಲ,ಆದರೆ ಬರೆಯಲು ಶುರು ಮಾಡಿದ್ದನ್ನು ಪೂರ್ತಿ ಮಾಡಲು ಆಗಿಲ್ಲ...ಆದರೆ ಅಡಿಗರ ಜನ್ಮದಿನದ ಸಂದರ್ಭದಲ್ಲಿ ಅವರ ಕವನವನ್ನ ಇಲ್ಲಿ ಪ್ರಕಟಿಸಿದೆ...ಮೊದಲ ಕಾರಣ ಅವರ ಜನ್ಮದಿನ,ಎರಡನೆಯದು ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು :-)

ಈಗಿನ ಬರಹದ ವಿಷಯ ಇದಲ್ಲ,ಆದರೂ ವಿಷಯ ಪ್ರಸ್ತಾಪ ಮಾಡಿದ್ದೇನೆ ಅಷ್ಟೆ...

ವಿಷಯ ಏನಪ್ಪಾ ಅಂದರೆ ನಾನು ಬ್ಲಾಗ್ ಪ್ರಾರಂಭ ಮಾಡಿ ಹತ್ರ ಹತ್ರ ೩ ತಿಂಗಳು ಆಗ್ತಾ ಬಂತು,ಈ ಅವಧಿಯಲ್ಲಿ ನನ್ನ ಬ್ಲಾಗ್ ಹಿಮ್ಬಾಲಿಸುವವರ ಸಂಖ್ಯೆ ೭ಕ್ಕೆ ತಲುಪಿದೆ...ಇದು ನನಗಂತೂ ಖುಷಿಯ ವಿಷಯ :-)
೧ರಿನ್ದ ಆರಂಭವಾದ ಹಿಂಬಾಲಕರ ಅಂಕಿ ಮೊನ್ನೆ ೭ಕ್ಕೆ ತಲುಪಿದಾಗ ನನಗೆ ಸಂತಸ ಆಗಿದ್ದು ಸುಳ್ಳಲ್ಲ...ಆದರೆ ನೆನ್ನೆ ನೋಡ್ತೀನಿ ಹಿಂಬಾಲಕರೆಲ್ಲ ನಾಪತ್ತೆ!! ಮತ್ತೊಮ್ಮೆ ಪರಿಶೀಲನೆ ಮಾಡಿದೆ,ಬಹುಶ ನಾನೇ ಸರಿಯಾಗಿ ನೋಡಿಲ್ಲವೇನೋ ಎಂದು,ಉಹು ಇಲ್ಲ ಎಲ್ಲೂ ಹಿಂಬಾಲಕರು ಕಾಣುತ್ತಿಲ್ಲ :(

ಇದು ಹೇಗಾಯಿತು ಯಾಕಾಯಿತು ನನಗೆ ಅರ್ಥವಾಗುತ್ತಿಲ್ಲ,ಒಟ್ಟಿನಲ್ಲಿ ಇದೊಂದು ನಿಗೂಢದಂತೆ ಭಾಸವಾಗುತ್ತಿದೆ!!
ತಾಂತ್ರಿಕ ದೋಷವಿರಬಹುದು...

ಇದನ್ನು ಓದಿದವರಲ್ಲಿ ಈ ಹಿಂದೆ ನನ್ನ ಬ್ಲಾಗ್ನ ಹಿಂಬಾಲಕರಾಗಿದ್ದವರು ಇದ್ದರೆ ,ಪುನಃ ಹಿಂಬಾಲಕರಾಗಬಹುದು...ಆಗದಿದ್ದವಾರು ಇನ್ನು ಮುಂದೆ ಇಷ್ಟವಾದರೆ ಆಗಬಹುದು.

-ಇಂತಿ ಸಿಂಚನ
Powered By Blogger

Followers