Friday, August 20, 2010

ಬೇರಿನ ಭದ್ರತೆ

ಸ್ವಂತವಲ್ಲದ ಪರಿಸರದಲ್ಲಿ ಸೌಹಾರ್ದಯುತ ಸಂಬಂಧಗಳ ಬಯಸಿ,
ಮನದ ತುಂಬೆಲ್ಲ ಅದರ ಸೌಗ೦ಧವ ಕಲ್ಪಿಸಿ,
ಕೊನೆಗದು ಕೇವಲ ಕಲ್ಪನೆಯೆಂದು ಅನಿಸಿ,
ಭಾವಬಿ೦ದುಗಳ ಜೋಡಿಸುವ ಹಂಬಲದಲ್ಲಿ
ಜೀವದ ಬೇರನ್ನು  ಅರಸಿ,
ಹೋದೆ ನಾನು ಮತ್ತದೇ ಬಯಕೆಯಲ್ಲಿ...

ಅಂತೂ ಸೌಹಾರ್ದಯುತ ಸಂಬಂಧಗಳ ಕೊಂಡಿ ಸಿಕ್ಕಿತು,.
ಅದೂ ಜೀವದ ಬೇರಿನ ಬುಡದಲ್ಲಿ...
ಕಲ್ಪನೆ, ಅದು ಕಲ್ಪನೆಯಾಗಿ ಉಳಿದಿಲ್ಲ ವಾಸ್ತವತೆಯೊಟ್ಟಿಗೆ ಮಿಳಿತಗೊ೦ಡಿದೆ
 ಭಾವ ಬಿಂದುಗಳ
ಜೋಡಣೆಯ ಕಾರ್ಯದಲಿ ಮಗ್ನಳಾಗಿ ಮನ ಪುಳಕಗೊಂಡಿದೆ ....

2 comments:

ಸೀತಾರಾಮ. ಕೆ. / SITARAM.K said...

ಶುಭವಾಗಲಿ. ಚೆಂದದ ಶಬ್ದ ಲಾಲ್ತ್ಯ ಕವನ.

ಶರಶ್ಚಂದ್ರ ಕಲ್ಮನೆ said...

ಕವನ ಚಂದಿದ್ದು...

Powered By Blogger

Followers