ಯುಗಾದಿಯ ಸಮಯದಲ್ಲಿ ಒಂದು ಪೋಸ್ಟಿಂಗ್ ಮಾಡಣ ಅಂತ ಅನ್ನಿಸ್ತು, ಆದರೆ ಹೊಸ ಬರಹ ಏನಲ್ಲ ಎಲ್ಲೋ ಬರೆದಿಟ್ಟಿದ್ದ ಕೆಲವು ಸಾಲುಗಳನ್ನೇ ಇಲ್ಲಿ ಪ್ರಕಟಿಸುತ್ತಿದ್ದೇನೆ,ಪ್ರಕಟಿಸುವ ಉತ್ಸಾಹಕ್ಕಾಗಿ... :-)
*ಕರಿ ನೆರಳಿನಿಂದ ದೂರ ಸರಿದು ಹೊಸ ಬೆಳಕ ಕಣ್ಣಲಿ ತುಂಬಿಕೊಳ್ಳಲು
ಜೀವನದ ಕನಸ ಕನಸಿಸಲು ಕೂಡಿ ಬಂದ ಸಮಯ...
*ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ ,ಇಂದಿಗೂ ಅದನ್ನು
ಜೀವಂತವಾಗಿರಿಸಲು ಉತ್ಸುಕಳಾಗಿರುವೆ,ಅದಕ್ಕಾಗಿ ಆಗಾಗ ನಿನ್ನ ಪ್ರತಿಕ್ರಿಯೆಯ ಬಯಸುತ್ತಿರುವೆ ...
*ಕಣ್ಣೊಳಗಿನ ಕನಸ ಕಣ್ಣ ಹೊಳಪಾಗಿಸು, ಬದುಕ ಬೆಳಕಾಗಿಸು
ಮನದೊಳಗಿನ ಪ್ರೀತಿಯ ಬದುಕ ಸ್ಫೂರ್ತಿಯಾಗಿಸು,ಜೀವನದ ಆದ್ಯತೆಯಾಗಿಸು...
*ಸೂರ್ಯರಶ್ಮಿ ಪ್ರಖರತೆ ಸಾಕೇ ಕಣ್ಣ ಪೊರೆ,
ತೆರೆಸಲು ಮನದ ಬಣ್ಣ ಅರಿಯಲು...
ಹಿತವಾದ ಎಲೆ ಬಿಸಿಲೋ ಅಥವಾ ಸುಡುವ ಬಿರು ಬಿಸಿಲೋ.....?
ಯಾವುದು ಚೆನ್ನ ನೀನೆ ಹೇಳು....
6 comments:
Dear Sinchana,
yugaadi habbada haardika shubhaashayagalu,
Guru
ನಿಮಗೂ ಯುಗಾದಿಯ ಶುಭಾಷಯಗಳು
"ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ" ಈ ಸಾಲುಗಳು ತುಂಬಾ ಇಷ್ಟ ಆದವು. ಬಹಳ ದಿನ ಆಗಿದ್ದವು, ನೀವು ಬರೆಯದೇ.. ಪ್ರಕಟಿಸುವ ಉತ್ಸಾಹಕ್ಕಾದರು ನಿಮ್ಮ ಒಂದು ಪೋಸ್ಟ್ ಬಂದದ್ದು ಸಂತೋಷ ತಂದಿತು. ಯುಗಾದಿಯ ಹಾರ್ದಿಕ ಶುಭಾಶಯಗಳು (ತಡವಾಗಿ.... )
- ಶರಶ್ಚಂದ್ರ ಕಲ್ಮನೆ
ಥ್ಯಾಂಕ್ಸ್... :-) ಹೌದು ಸುಮಾರು ದಿನ ಆತು ಬರಿದೆ...ನಿನಗೂ ಯುಗಾದಿಯ ತಡವಾದ ಶುಭಾಶಯಗಳು ...
ಸಾಲುಗಳು ಸುಂದರವಾಗಿದ್ದು... ಹಿಂಗೆ ಅಪ್ಡೇಟ್ ಮಾಡ್ತಾ ಇರು ಬ್ಲಾಗ್ ನ :)
Hi Radhika,
Manada maatugala yaaraadaru shabdagallalli hididukottare anthaha baraha manasige tumba hattiravaaguttadante.Nimma blog tale baraha "maatu mounagala naduve" nannannu blogina olagade yenide antha yinuki nodalu prerepisitu. Uttama barahakke danyavaadagalu
Post a Comment